ಅಂತವರಿಂತವರು
ನಿಂತವರೆಂತವರು
ಅಂತೆ ಕಂತೆ ಶುರು
ಮಂಥನ ಬಲು ಜೋರು
ಪಂಥಕೆ ಇಳಿವವರ್ಯಾರು
ಚಿಂತೆಯೊಳಿಳಿದಿಹರಿವರು
ಕುಂತರೂ ನಿಂತರೂ ಶುರು
ಚಿಂತಕರಾಗಿಹರೀ ಜನರು
ಹಣವನು ಚೆಲ್ಲುವನಾರು
ಬಣಗಳ ಒಡೆಯುವನಾರು
ಜಾಣತೆ ಅದೆ ಎನ್ನುವರು
ಗಣಿತವ ಮಾಡುತಲಿಹರು
ಸ್ವಜಾತಿಜನ ಪ್ರಿಯನಾರು
ವಿಜಾತಿಯವನು ಯಾರು
ರಾಜಕೀಯದ ಬೇರು
ಈ ಜನಗಣಿತದ ಉಸಿರು.
ವಿದ್ಯೆ ಬುದ್ಧಿಗಳಿರಲಿ
ಆದ್ಯತೆ ಸಾಧನೆಯಿರಲಿ
ಸಾಧ್ಯವೇ ಇಲ್ಲ ಗೆಲಲಿಲ್ಲಿ
ವೇದ್ಯವೆನುತಿಹರಿವರು.
ಭ್ರಷ್ಟರಾದರೂ ಕೂಡ
ಇಷ್ಟ ಪಡುವರ ನೋಡ
ಕಷ್ಟಜೀವಿಯು ಕುರುಡ
ನಿಷ್ಠತೆ ಹಿಡಿಸಿತು ಮೋಡ
ಯಾರಿಗೆ ಮಠಗಳ ಒಲವು
ಯಾರದು ಮಾತಿನ ಚೆಲುವು
ಯಾರಿಗೆ ಇಲ್ಲಿ ಗೆಲುವು
ಅರಿತಿಹರೆಲ್ಲಾ ಸುಳಿವು.
ಕಳೆದಿಹ ನಿನ್ನೆಯ ಕುರಿತು
ದಳ್ಳುರಿಯೆಲ್ಲಾ ಮರೆತು
ಕಳೆಯಲು ಕಾಲವ ಕುಳಿತು
ಒಳ್ಳೆ ಕುರುಕಲು ಮೆಲುಕು.
ನಿಂತವರೆಂತವರು
ಅಂತೆ ಕಂತೆ ಶುರು
ಮಂಥನ ಬಲು ಜೋರು
ಪಂಥಕೆ ಇಳಿವವರ್ಯಾರು
ಚಿಂತೆಯೊಳಿಳಿದಿಹರಿವರು
ಕುಂತರೂ ನಿಂತರೂ ಶುರು
ಚಿಂತಕರಾಗಿಹರೀ ಜನರು
ಹಣವನು ಚೆಲ್ಲುವನಾರು
ಬಣಗಳ ಒಡೆಯುವನಾರು
ಜಾಣತೆ ಅದೆ ಎನ್ನುವರು
ಗಣಿತವ ಮಾಡುತಲಿಹರು
ಸ್ವಜಾತಿಜನ ಪ್ರಿಯನಾರು
ವಿಜಾತಿಯವನು ಯಾರು
ರಾಜಕೀಯದ ಬೇರು
ಈ ಜನಗಣಿತದ ಉಸಿರು.
ವಿದ್ಯೆ ಬುದ್ಧಿಗಳಿರಲಿ
ಆದ್ಯತೆ ಸಾಧನೆಯಿರಲಿ
ಸಾಧ್ಯವೇ ಇಲ್ಲ ಗೆಲಲಿಲ್ಲಿ
ವೇದ್ಯವೆನುತಿಹರಿವರು.
ಭ್ರಷ್ಟರಾದರೂ ಕೂಡ
ಇಷ್ಟ ಪಡುವರ ನೋಡ
ಕಷ್ಟಜೀವಿಯು ಕುರುಡ
ನಿಷ್ಠತೆ ಹಿಡಿಸಿತು ಮೋಡ
ಯಾರಿಗೆ ಮಠಗಳ ಒಲವು
ಯಾರದು ಮಾತಿನ ಚೆಲುವು
ಯಾರಿಗೆ ಇಲ್ಲಿ ಗೆಲುವು
ಅರಿತಿಹರೆಲ್ಲಾ ಸುಳಿವು.
ಕಳೆದಿಹ ನಿನ್ನೆಯ ಕುರಿತು
ದಳ್ಳುರಿಯೆಲ್ಲಾ ಮರೆತು
ಕಳೆಯಲು ಕಾಲವ ಕುಳಿತು
ಒಳ್ಳೆ ಕುರುಕಲು ಮೆಲುಕು.