ಕನ್ನಡದಲ್ಲಿ ಬರೆದು ಹುಡುಕಿ

ಜ್ಞಾನದ ಸ್ನಾನದಿ ಮನಶುಚಿಗೂಳಿಸು ಗುಣಬಣ್ಣ ಹೂಳೆವವು ಅನುಗಾಲ.

ಕೊಳೆಗಳ ಕಳೆಯದೆ ಬಳಿದಿಹ ಬಣ್ಣವು
ಮಳೆದಾಳಿಯಲಿ ನಲುಗುತಿದೆ.
ದಿನಗಳೆದಂತೆ ಹಳೆದಾದಂತೆ
ಒಳಗಿನ ಹುಳುಕುಗಳೇಳುತಿದೆ
ಬಲ್ಲವನೆಂದು ಸುಳ್ಳುಗಳಲ್ಲೆ
ಎಲ್ಲರ ಮನದಲಿ ಸಲ್ಲುವನು
ಬಲ್ಲವನೂಬ್ಬನು ಅಲ್ಲಿಗೆ ಬಂದು
ಎಲ್ಲವನಳಿಸಿ ಗೆಲ್ಲುವನು.
ಬಲಹೀನನಿಗೆ ಬಲ ತಾನೆಂದು
ಬೆಲ್ಲದ ಮಾತಲಿ ಓಲೈಸೆ
ಕೆಲ ಕಾಲದಲೆ ಎಲ್ಲವೂ ಬಯಲು
ಕಲ್ಲಲಿ ಹೊಡೆದು ತಳ್ಳುವರು
ಮಾನದ ಆಸೆಗೆ ಏನೇನೇನೋ
ಜಾಣತನಗಳ ತೋರದಿರು
ಜ್ಞಾನದ ಸ್ನಾನದಿ ಮನಶುಚಿಗೂಳಿಸು
ಗುಣಬಣ್ಣ ಹೂಳೆವವು ಅನುಗಾಲ.

ಕಥಾಕಾಲಕ್ಷೇಪ

ಅಂತವರಿಂತವರು ನಿಂತವರೆಂತವರು ಅಂತೆ ಕಂತೆ ಶುರು ಮಂಥನ ಬಲು ಜೋರು ಪಂಥಕೆ ಇಳಿವವರ್ಯಾರು ಚಿಂತೆಯೊಳಿಳಿದಿಹರಿವರು ಕುಂತರೂ ನಿಂತರೂ ಶುರು ಚಿಂತಕರಾಗಿಹರೀ ಜನರು ಹಣವನು ಚೆಲ್...