ಕನ್ನಡದಲ್ಲಿ ಬರೆದು ಹುಡುಕಿ

ಮಳೆ ಸುಳಿಯ ಬಾಳು


ಇಳೆ ಬಿರಿವಂತೆ ಝಳವೇರುವುದು
ಕಳೆಗಳೂ ಸತ್ತು ತಳಹಿಡಿಯುವುದು
ನಾಳಿನ ಬಾಳಿನ ಕಳವಳದಲ್ಲಿ
ಇಳಿದಿದೆ ಕಣ್ಣೀರು.
ಹನಿಸಲು ಮಳೆಯು ಮನ ಅರಳುವುದು
ಧಾನ್ಯವ ಬಿತ್ತಲು ತನು ಶ್ರಮಿಸುವುದು
ಅನುಪಾಲಿಸುತಲಿ ಕನಸನು ಕಟ್ಟಲು
ಹನಿಸಿದೆ ಪನ್ನೀರು.
ತಟ್ಟನೆ ಮಳೆಯು ಮರೆಯಾಗುವುದು
ನೆಟ್ಟಿಹ ಹಸಿರು ಸುಟ್ಟೊಣಗುವುದು
ಕಟ್ಟೆಯ ಕಟ್ಟಿ ಹರಿಸುವ ತೋಡಲು
ಬತ್ತಿತು ಹಿನ್ನೀರು.
ಬಿಸಿಲಿನ ನಡುವೆ ಸುಳಿ ಮಳೆ ಗಾಳಿ
ಮುಸುಕಿದ ತೆನೆ ಮೇಲೆ ಮಾಡುತ ದಾಳಿ
ಕೃಷಿಕನ ಹಸಿರಿನ ಬಸಿರಿನ ಆಸೆಗೆ
ಬಸಿಯಿತು ತಣ್ಣೀರು.

ಕಥಾಕಾಲಕ್ಷೇಪ

ಅಂತವರಿಂತವರು ನಿಂತವರೆಂತವರು ಅಂತೆ ಕಂತೆ ಶುರು ಮಂಥನ ಬಲು ಜೋರು ಪಂಥಕೆ ಇಳಿವವರ್ಯಾರು ಚಿಂತೆಯೊಳಿಳಿದಿಹರಿವರು ಕುಂತರೂ ನಿಂತರೂ ಶುರು ಚಿಂತಕರಾಗಿಹರೀ ಜನರು ಹಣವನು ಚೆಲ್...