ಭಾವ ಬಿರಿಯಿತು ಜೀವ ಕುಣಿಯಿತು
ಕವಿತೆ ಮೂಡಿತು ಎದೆಯಲಿ
ಭವ್ಯ ಕನ್ನಡದಾಳ ಅರಿಯೆನು
ಕಾವ್ಯವಾಗಿಸಲಾರೆನು
ಕವಿತೆ ಮೂಡಿತು ಎದೆಯಲಿ
ಭವ್ಯ ಕನ್ನಡದಾಳ ಅರಿಯೆನು
ಕಾವ್ಯವಾಗಿಸಲಾರೆನು
ಸುತ್ತ ಸುಂದರ ರಮ್ಯ ಪರಿಸರ
ಮತ್ತು ಏರಿದೆ ಮನದಲಿ
ಎತ್ತಿ ಹೇಳಲು ಬಿತ್ತರಿಸಲು
ಎತ್ತ ಹೋದವೊ ಪದಗಳು
ಮತ್ತು ಏರಿದೆ ಮನದಲಿ
ಎತ್ತಿ ಹೇಳಲು ಬಿತ್ತರಿಸಲು
ಎತ್ತ ಹೋದವೊ ಪದಗಳು
ಕವಿತೆಯಾಗಲು ಸ್ಫೂರ್ತಿ,ನೀತಿ,
ತೃಷೆಗಳಿದ್ದರೆ ಸಾಲದು
ಸವಿವ ಮನಸ್ಥಿತಿ ಅವಿರತ ಶ್ರಮ
ಕೃಷಿಗಳಿಲ್ಲದೆ ಆಗದು
ತೃಷೆಗಳಿದ್ದರೆ ಸಾಲದು
ಸವಿವ ಮನಸ್ಥಿತಿ ಅವಿರತ ಶ್ರಮ
ಕೃಷಿಗಳಿಲ್ಲದೆ ಆಗದು
ಸುರಿವ ಭಾವವ ಮರೆಸಲೇತಕೆ
ಬರುವ ಪದದಲೆ ಬರೆದಿಡು
ಸರಿಯೊ ತಪ್ಪೋ ಕೊರಗು ಏತಕೆ
ಅರಿವ ಮನಗಳ ಎದುರಿಡು
ಬರುವ ಪದದಲೆ ಬರೆದಿಡು
ಸರಿಯೊ ತಪ್ಪೋ ಕೊರಗು ಏತಕೆ
ಅರಿವ ಮನಗಳ ಎದುರಿಡು
0 ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ