ಕನ್ನಡದಲ್ಲಿ ಬರೆದು ಹುಡುಕಿ

ಭಾವ ಬಿರಿಯಿತು ಜೀವ ಕುಣಿಯಿತು

ಭಾವ ಬಿರಿಯಿತು ಜೀವ ಕುಣಿಯಿತು
ಕವಿತೆ ಮೂಡಿತು ಎದೆಯಲಿ
ಭವ್ಯ ಕನ್ನಡದಾಳ ಅರಿಯೆನು
ಕಾವ್ಯವಾಗಿಸಲಾರೆನು
ಸುತ್ತ ಸುಂದರ ರಮ್ಯ ಪರಿಸರ
ಮತ್ತು ಏರಿದೆ ಮನದಲಿ
ಎತ್ತಿ ಹೇಳಲು ಬಿತ್ತರಿಸಲು
ಎತ್ತ ಹೋದವೊ ಪದಗಳು
ಕವಿತೆಯಾಗಲು ಸ್ಫೂರ್ತಿ,ನೀತಿ,
ತೃಷೆಗಳಿದ್ದರೆ ಸಾಲದು
ಸವಿವ ಮನಸ್ಥಿತಿ ಅವಿರತ ಶ್ರಮ
ಕೃಷಿಗಳಿಲ್ಲದೆ ಆಗದು
ಸುರಿವ ಭಾವವ ಮರೆಸಲೇತಕೆ
ಬರುವ ಪದದಲೆ ಬರೆದಿಡು
ಸರಿಯೊ ತಪ್ಪೋ ಕೊರಗು ಏತಕೆ
ಅರಿವ ಮನಗಳ ಎದುರಿಡು

ಕಥಾಕಾಲಕ್ಷೇಪ

ಅಂತವರಿಂತವರು ನಿಂತವರೆಂತವರು ಅಂತೆ ಕಂತೆ ಶುರು ಮಂಥನ ಬಲು ಜೋರು ಪಂಥಕೆ ಇಳಿವವರ್ಯಾರು ಚಿಂತೆಯೊಳಿಳಿದಿಹರಿವರು ಕುಂತರೂ ನಿಂತರೂ ಶುರು ಚಿಂತಕರಾಗಿಹರೀ ಜನರು ಹಣವನು ಚೆಲ್...