ಕನ್ನಡದಲ್ಲಿ ಬರೆದು ಹುಡುಕಿ

ಸೋಲಿಲ್ಲದ ಸರದಾರ

ದೂರದೂರಿನಲಿ ಕೆಲಸ ಕಾರ್ಯದಲಿ
ಇರುವನವಳ ಗಂಡ
ಊರ ಸರದಾರ ರಾಜಗಂಭೀರ
ನಾರಿಯಂದದಲಿ ಬೆಂದ
ಕರುಣೆ ತೋರಿಸುತ ನೆರವ ನೀಡೊ ನೆಪ
ಆರೇಳು ಬಾರಿ ನಡಿಗೆ
ದಾರಿ ಸವೆಯುತಿದೆ ಸಾರಿ ಸಾರಿ ಸುಂ-
-ದರಿಯ ಮನೆಯ ಕಡೆಗೆ
ಜಾರಿ ಬಿದ್ದವಳು ಸೇರಿ ತೋಳುಗಳ
ಸೀರೆ ಕಳೆವಳೆಂಬ
ಅರಸನಾಸೆಗಳು ದೂರವಾಗುತ್ತಿತ್ತು
ಗರತಿಗೇಕೋ ಜಂಭ.
ಮಾರನಾಣತಿಯು ಜೋರು ಜೋರಾಗಿ
ಕೋರಿಕೊಂಡನವಳ
ನಾರಿ ಕರದಿಂದ ಮೋರೆಗಪ್ಪಳಿಸೆ
ಉರುಳಿಸಿದ ಬೇರೆ ದಾಳ.
ನಾರಿ ಕರೆವಳೆಂದು ಊರ ಜನರೊಳಗೆ
ಹರಡುತಿದ್ದ ಸುಳ್ಳು
ಭೂರಿ ಭೋಜನವು ದೊರೆತ ಜಿಹ್ವೆಗಳು
ಸುರಿಸುತಿತ್ತು ಜೊಲ್ಲು
ಊರು ಕೇರಿಯಲೂ ದಾರಿ ನಡುವಿನಲು
ಹರಡುತಿತ್ತು ಸುದ್ದಿ
ಜಾರ ಅರಸನಿಗೆ ಕರವ ಮುಗಿಯುತಲಿ
ಮರೆತರವರ ಬುದ್ಧಿ
ಬೆರೆಯಲಿನ್ನೆಂತು ದೂರದಿನಿಯನಿಗೆ
ಅರುಹಳವಳು ದಿಟವ
ಕರೆಸಿಕೊಂಡವನು ಒರೆಸಿ ಕಣ್ಣೀರ
ಮರೆಸುತಿಹನವಳ ದುಃಖವ
ಊರ ನಡುವಿನಲಿ ನೂರು ಕಥೆಗಳಿವೆ
ಅರಿಯರವಳ ಗೋಳ
ಊರ ಅರಸನಿಗೆ ಸೆರಗು ಹಾಸಿದ
ಜಾರೆಯೆಂಬರವಳ.
ಕೋತಿಯೂಟವನು ಒರೆಸೊ ಬಾಲಕ್ಕೆ
ಮತಿಗಳೆಲ್ಲಿ ಇಹುದು.
ರೀತಿ ನೀತಿಗಳ ತಿಂದು ಹೊಲಸಾದ
ಮೂತಿಯೊರೆಸುತಿಹುದು.

2 ಕಾಮೆಂಟ್‌ಗಳು

Usha ಹೇಳಿದರು...

ತುಂಬಾ ಚನ್ನಾಗಿದೆ

Unknown ಹೇಳಿದರು...

ಧನ್ಯವಾದಗಳು ತಂಗಿ

ಕಥಾಕಾಲಕ್ಷೇಪ

ಅಂತವರಿಂತವರು ನಿಂತವರೆಂತವರು ಅಂತೆ ಕಂತೆ ಶುರು ಮಂಥನ ಬಲು ಜೋರು ಪಂಥಕೆ ಇಳಿವವರ್ಯಾರು ಚಿಂತೆಯೊಳಿಳಿದಿಹರಿವರು ಕುಂತರೂ ನಿಂತರೂ ಶುರು ಚಿಂತಕರಾಗಿಹರೀ ಜನರು ಹಣವನು ಚೆಲ್...