ಕನ್ನಡದಲ್ಲಿ ಬರೆದು ಹುಡುಕಿ

ಸುಂದರ ಸಂಜೆಯಲಿ ನಂದನವನದಲ್ಲಿ

ಸುಂದರ ಸಂಜೆಯಲಿ
ನಂದನವನದಲ್ಲಿ
ಬಂದು ನಿಂದಿರಲು
ತೊಂದರೆ ಕೊಡಲು
ಬಂದ ಸೊಳ್ಳೆಗಳೇ
ಇಂದು ಹಿಂದಿರುಗಿದರೂ
ಮುಂದೆ ಎಂದಾದರೂ
ಬಂದೇ ಬರುವೆ
ಗಂಧ ಪೂಸಿಯಾದರೂ
ಅಂದ ಸವಿಯಲು
ಛೆ,
ಮಂದಮತಿಯಾದೆ
ಗಂಧ ಸುಗಂಧಗಳೇಕೆ
ಸಂದಿಗೊಂದಿಯಲಿರುವ
ಹೊಂಡ ಹೊಲಸುಗಳನ್ನು
ಕಂಡೂ ಕಾಣದ ಹಾಗೆ
ಬಂದು ಹೋಗುತಲಿರುವೆ
ಉಂಡು ಉಬ್ಬಿದ ನಿಮ್ಮ
ದಂಡು ಬೆಳೆಯುತಲಿರಲು
ಎಂದು ಪಡೆಯುವೆ ನಾನು
ಅಂದ ಚಂದದ ಸವಿಯಾ
ನೊಂದು ಬೆಂದಿಹ ಎಲ್ಲ
ಬಂಧು ಭಗಿನಿಯರೆಲ್ಲ
ಒಂದೆ ಮನದಲಿ ಬನ್ನಿ
ಬಂದು ಓರಣ ಮಾಡಿ
ನಾಂದಿ ಹಾಡುವ ನಾವು
ಇಂದ್ರನಗರಿಗೆ....

ಕಥಾಕಾಲಕ್ಷೇಪ

ಅಂತವರಿಂತವರು ನಿಂತವರೆಂತವರು ಅಂತೆ ಕಂತೆ ಶುರು ಮಂಥನ ಬಲು ಜೋರು ಪಂಥಕೆ ಇಳಿವವರ್ಯಾರು ಚಿಂತೆಯೊಳಿಳಿದಿಹರಿವರು ಕುಂತರೂ ನಿಂತರೂ ಶುರು ಚಿಂತಕರಾಗಿಹರೀ ಜನರು ಹಣವನು ಚೆಲ್...