ಕನ್ನಡದಲ್ಲಿ ಬರೆದು ಹುಡುಕಿ

ಕಥಾಕಾಲಕ್ಷೇಪ

ಅಂತವರಿಂತವರು
ನಿಂತವರೆಂತವರು
ಅಂತೆ ಕಂತೆ ಶುರು
ಮಂಥನ ಬಲು ಜೋರು

ಪಂಥಕೆ ಇಳಿವವರ್ಯಾರು
ಚಿಂತೆಯೊಳಿಳಿದಿಹರಿವರು
ಕುಂತರೂ ನಿಂತರೂ ಶುರು
ಚಿಂತಕರಾಗಿಹರೀ ಜನರು

ಹಣವನು ಚೆಲ್ಲುವನಾರು
ಬಣಗಳ ಒಡೆಯುವನಾರು
ಜಾಣತೆ ಅದೆ ಎನ್ನುವರು
ಗಣಿತವ ಮಾಡುತಲಿಹರು

ಸ್ವಜಾತಿಜನ ಪ್ರಿಯನಾರು
ವಿಜಾತಿಯವನು ಯಾರು
ರಾಜಕೀಯದ ಬೇರು
ಈ ಜನಗಣಿತದ ಉಸಿರು.

ವಿದ್ಯೆ ಬುದ್ಧಿಗಳಿರಲಿ
ಆದ್ಯತೆ ಸಾಧನೆಯಿರಲಿ
ಸಾಧ್ಯವೇ ಇಲ್ಲ ಗೆಲಲಿಲ್ಲಿ
ವೇದ್ಯವೆನುತಿಹರಿವರು.

ಭ್ರಷ್ಟರಾದರೂ ಕೂಡ
ಇಷ್ಟ ಪಡುವರ ನೋಡ
ಕಷ್ಟಜೀವಿಯು ಕುರುಡ
ನಿಷ್ಠತೆ ಹಿಡಿಸಿತು ಮೋಡ

ಯಾರಿಗೆ ಮಠಗಳ ಒಲವು
ಯಾರದು ಮಾತಿನ ಚೆಲುವು
ಯಾರಿಗೆ ಇಲ್ಲಿ ಗೆಲುವು
ಅರಿತಿಹರೆಲ್ಲಾ ಸುಳಿವು.

ಕಳೆದಿಹ ನಿನ್ನೆಯ ಕುರಿತು
ದಳ್ಳುರಿಯೆಲ್ಲಾ ಮರೆತು
ಕಳೆಯಲು ಕಾಲವ ಕುಳಿತು
ಒಳ್ಳೆ ಕುರುಕಲು ಮೆಲುಕು.

1 ಕಮೆಂಟ್

@spn3187 ಕನ್ನಡಿಗ ಶಿವಕುಮಾರ ನೇಗಿಮನಿ ಹೇಳಿದರು...

ಕನ್ನಡವನ್ನು ಆಯ್ಕೆ ಮಾಡಿ

ಕನ್ನಡದ ಅರಮನೆಗೆ ಬರಲು ತಮಗೆ ಆದರದಿಂದ ಸ್ವಾಗತಿಸುತ್ತೇವೆ...
..
ಕನ್ನಡವನ್ನು ಉಳಿಸಿ, ಬೆಳೆಸಿ..
..
Www.spn3187.blogspot.in (already site viewed 1,31,549+)
&
T.me/spn3187
..
Share your friends & family also subcrib (join)

ಕಥಾಕಾಲಕ್ಷೇಪ

ಅಂತವರಿಂತವರು ನಿಂತವರೆಂತವರು ಅಂತೆ ಕಂತೆ ಶುರು ಮಂಥನ ಬಲು ಜೋರು ಪಂಥಕೆ ಇಳಿವವರ್ಯಾರು ಚಿಂತೆಯೊಳಿಳಿದಿಹರಿವರು ಕುಂತರೂ ನಿಂತರೂ ಶುರು ಚಿಂತಕರಾಗಿಹರೀ ಜನರು ಹಣವನು ಚೆಲ್...