ವೆಂಕಟರಮಣ ಸಂಕಟಹರಣ
ಮೊರಸೆಯ ಜನಮನ ಧಣಿ ಕರುಣ
ಭೂರಮೆರಮಣ ಧನುಶರಧಾರಣ
ಭಕುತಿಗೆ ಒಲಿಯುವ ಗುಣಸದನ.
ವನಸಿರಿ ನಡುವೆ ನಿನ್ನಿರುವಿಂದ
ವನದೇವಿಗಾಯಿತು ಆನಂದ
ವನತರುಲತೆಗಳ ಸುಮಫಲಗಂಧ
ನಿನ್ನೆಡೆ ತರುವಳು ಒಲವಿಂದ.
ಭೂದೇವಿ ಸೇವಿತ ನಿನಜೊತೆಯಾಗುತ
ಜಲದೇವಿ ಹರಿದಳು ಅನವರತ
ವನಖನಿಜಗಳಾ ಒಡಲಲಿ ತರುತಾ
ಬೆಳೆಗಳಿಗಮೃತ ಒದಗಿಸುತಾ.
ಧನುಶರ ಹಿಡಿದಾ ಶುಭಕರದಿಂದ
ಮೃಗಭಯ ಕಳೆಯುವೆ ಗೋವಿಂದ
ಧನಧಾನ್ಯಗಳಾ ವೃಧ್ಧಿ ನಿನ್ನಿಂದ
ಸುಖಶಾಂತಿ ನೀಡುವೆ ಕರುಣದಿಂದ.
ಮೊರಸೆಯ ಜನಮನ ಧಣಿ ಕರುಣ
ಭೂರಮೆರಮಣ ಧನುಶರಧಾರಣ
ಭಕುತಿಗೆ ಒಲಿಯುವ ಗುಣಸದನ.
ವನಸಿರಿ ನಡುವೆ ನಿನ್ನಿರುವಿಂದ
ವನದೇವಿಗಾಯಿತು ಆನಂದ
ವನತರುಲತೆಗಳ ಸುಮಫಲಗಂಧ
ನಿನ್ನೆಡೆ ತರುವಳು ಒಲವಿಂದ.
ಭೂದೇವಿ ಸೇವಿತ ನಿನಜೊತೆಯಾಗುತ
ಜಲದೇವಿ ಹರಿದಳು ಅನವರತ
ವನಖನಿಜಗಳಾ ಒಡಲಲಿ ತರುತಾ
ಬೆಳೆಗಳಿಗಮೃತ ಒದಗಿಸುತಾ.
ಧನುಶರ ಹಿಡಿದಾ ಶುಭಕರದಿಂದ
ಮೃಗಭಯ ಕಳೆಯುವೆ ಗೋವಿಂದ
ಧನಧಾನ್ಯಗಳಾ ವೃಧ್ಧಿ ನಿನ್ನಿಂದ
ಸುಖಶಾಂತಿ ನೀಡುವೆ ಕರುಣದಿಂದ.
0 ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ