ಕನ್ನಡದಲ್ಲಿ ಬರೆದು ಹುಡುಕಿ

ನೇಗಿಲ ಯೋಗಿ

ಹೊಲವನು ಉಳುತಿಹ ಚೆಲುವನ ನೋಡಲು
ನಾ ಲಜ್ಜಿಯಲಿ ತಳಕಿಳಿದೆ
ಮಳೆಗಾಳಿಯಲೂ ಛಳಿ ಬಿಸಿಲಿನಲೂ
ಕೆಲಸದೊಳೊಲವು ಛಲವೂ ಇದೆ
ಕೋಮಲ ತೊಗಲನು ಕಮರಿಸೊ ಬೆವರನು
ಗಮನಿಸದೇ ಪರಿಶೃಮಿಸುವನು
ಧರ್ಮವೊ ಕರ್ಮವೊ ಮರ್ಮಗಳರಿಯನು
ನಿರ್ಮಲ ಮನಸಿನ ಕಾರ್ಮಿಕನು
ನಾಡಲಿ ಎನೇ ನಡೆಯುತಲಿರಲಿ
ಗೊಡವೆಗಳಿಲ್ಲದೆ ದುಡಿವನಿವ
ಪೊಡವಿಯ ಹಸಿವಿನ ಒಡಲನು ತುಂಬಿಪ
ಆ ಢಂಬವನೆಂದೂ ಮಾಡನಿವ
ಭೂರಮೆ ಹರಸಲಿ ಸಾರವ ಸ್ಫುರಿಸಲಿ
ವರುಣನ ಧಾರೆಯು ನೆರವಿಡಲಿ
ಪೈರಲಿ ತೆನೆಗಳು ಅರಳಿ ನಗಲಿ
ಸುರಿಸುವ ಬೆವರಿಗೆ ದರ ಸಿಗಲಿ.


ಕಥಾಕಾಲಕ್ಷೇಪ

ಅಂತವರಿಂತವರು ನಿಂತವರೆಂತವರು ಅಂತೆ ಕಂತೆ ಶುರು ಮಂಥನ ಬಲು ಜೋರು ಪಂಥಕೆ ಇಳಿವವರ್ಯಾರು ಚಿಂತೆಯೊಳಿಳಿದಿಹರಿವರು ಕುಂತರೂ ನಿಂತರೂ ಶುರು ಚಿಂತಕರಾಗಿಹರೀ ಜನರು ಹಣವನು ಚೆಲ್...