ಕನ್ನಡದಲ್ಲಿ ಬರೆದು ಹುಡುಕಿ

ಸ್ಪಂದನೆ

ಧನುಶರ ಹಿಡಿಯದೆ ನೀ ಕರದಲ್ಲಿ
ಕಣ್ಣಿನ ನೋಟದ ಬಾಣಗಳಲ್ಲೆ
ಮಣಿಸುವೆಯಲ್ಲೇ,ಗೊಣಗುವೆಯಲ್ಲೇ
ತಾಯಿಯ ಮನೆ ಜಪ ಮಾಡುವೆಯಲ್ಲೇ
ಸಾಯುವ ಮಾತುಗಳಾಡುವೆಯಲ್ಲೆ
ಬೇಯುವೆಯಲ್ಲೇ,ಬಯ್ಯುವೆಯಲ್ಲೆ
ಸುಡುಬಿಸಿಲಿಗೆ ನೀರು ಕಡಲನು ತೊರೆದು
ಮೋಡಗಳಾದರೂ ತಣಿಯುವವಲ್ಲೆ
ಕಡಲನು ಮರಳಿ ಸೇರುವವಲ್ಲೆ
ದುಡುಕಿ ನಾನಾಡಿದ ಒಂದೇ ನುಡಿಗೆ
ಸಿಡುಕುತಲಿದ್ದರೆ ಸಾಗದು ನಡಿಗೆ
ತಡವುವೆ ತಣ್ಣಗೆ ಉದುರಿಸು ಹೂನಗೆ
ಮುಟ್ಟಲು ಮುದುರುವ ನಾಚಿಕೆ ಪೊದೆಯು
ಮತ್ತರಳಿಸಿ ಎಲೆಗಳ ಹರಡುತಲಿಹವು
ನೀತಿಯೆಂದರಿಯೇ ,ಚಿಂತೆಯ ಕಳೆಯೆ
ಇಬ್ಬರೂ ಶಾಂತಿಯ ಬೆಲೆಯರಿತಿದ್ದರೆ
ಒಬ್ಬರನೊಬ್ಬರು ಕ್ಷಮಿಸುತಲಿದ್ದರೆ
ಹಬ್ಬವೇ ಚದುರೆ,. ಕಂಬನಿಯೇಕೆ

ಕಥಾಕಾಲಕ್ಷೇಪ

ಅಂತವರಿಂತವರು ನಿಂತವರೆಂತವರು ಅಂತೆ ಕಂತೆ ಶುರು ಮಂಥನ ಬಲು ಜೋರು ಪಂಥಕೆ ಇಳಿವವರ್ಯಾರು ಚಿಂತೆಯೊಳಿಳಿದಿಹರಿವರು ಕುಂತರೂ ನಿಂತರೂ ಶುರು ಚಿಂತಕರಾಗಿಹರೀ ಜನರು ಹಣವನು ಚೆಲ್...