ಕನ್ನಡದಲ್ಲಿ ಬರೆದು ಹುಡುಕಿ

ಶ್ರೀ ಗಿರೀಶ ಭಾರಧ್ವಾಜರಿಗೆ ನುಡಿನಮನ.

ಶ್ರೀ ಗಿರೀಶ ಭಾರಧ್ವಾಜರು 
ಭಾರತಮಾತೆಯ ವರಪುತ್ರರು
ತಾರೆಯ ತೆರದಲಿ ಮಿರುಗುವರು 
ಹರಿಯುವ ನದಿಗೆ ತೂಗುಸೇತುವೆ
ನಿರ್ಮಿಸಿ ನರರಿಗೆ ನೀಡಿದರು
ಕರಗಳ ಮುಗಿಯಲು ಯೋಗ್ಯರು.
ತಾಯಿ ಭಾರತಿಯ ಆಯಕಟ್ಟಿನಲಿ
ಪಯನಿಧಿ ದಾಟುವ ಭಯಗಳಿಗೆ
ಕಾಯುತಲಿರುವಾ ಮನಗಳಿಗೆ
ಕಾಯಕಯೋಗಿಯ ಕಾಯಕದಿಂದಾ
ಭಯಗಳು ಕಳೆದು ಧೈರ್ಯ ಮೂಡಿತು
ಬಯಸಿದ ಭಾಗ್ಯ ಕೈಯ ಸೇರಿತು.
ಅಡವಿಯ ಜಾಡನು ನಾಡಿನ ಹಾದಿಗೆ
ಸಂಧಿಸಿ ಬಂಧನ ಬಿಡಿಸುವರು
ಬಡವರ ಬಂಧು ಇವರು
ಮುಂದಿನ ಪೀಳಿಗೆ ಸಾಧನೆ ಹಾದಿಯ
ಅಡೆತಡೆ ಕಳೆಯುವ ಸಾಧಕರು
ಬದುಕನು ನೀಡಿದ ದೇವರು.
ಶಾಂತಿ ಸಹನೆಯ ಕಾಂತಿಯ ನಗುವಿನ
ಪ್ರೀತಿ ಪ್ರೇಮದ ಮಾತುಗಳು
ನೀತಿ ನ್ಯಾಯದ ಕಥನಗಳು
ಹತ್ತಿರವಿದ್ದರೆ ಮಠಗಳ ಮರೆಸುವ
ಕಾಂತಿಯ ತೇಜದ ಯತಿಯಿವರು
ಸತ್ಯ ತ್ಯಾಗದ ದೂತರು.

ಕಥಾಕಾಲಕ್ಷೇಪ

ಅಂತವರಿಂತವರು ನಿಂತವರೆಂತವರು ಅಂತೆ ಕಂತೆ ಶುರು ಮಂಥನ ಬಲು ಜೋರು ಪಂಥಕೆ ಇಳಿವವರ್ಯಾರು ಚಿಂತೆಯೊಳಿಳಿದಿಹರಿವರು ಕುಂತರೂ ನಿಂತರೂ ಶುರು ಚಿಂತಕರಾಗಿಹರೀ ಜನರು ಹಣವನು ಚೆಲ್...