ಶ್ರೀ ಗಿರೀಶ ಭಾರಧ್ವಾಜರು
ಭಾರತಮಾತೆಯ ವರಪುತ್ರರು
ತಾರೆಯ ತೆರದಲಿ ಮಿರುಗುವರು
ಹರಿಯುವ ನದಿಗೆ ತೂಗುಸೇತುವೆ
ನಿರ್ಮಿಸಿ ನರರಿಗೆ ನೀಡಿದರು
ಕರಗಳ ಮುಗಿಯಲು ಯೋಗ್ಯರು.
ತಾಯಿ ಭಾರತಿಯ ಆಯಕಟ್ಟಿನಲಿ
ಪಯನಿಧಿ ದಾಟುವ ಭಯಗಳಿಗೆ
ಕಾಯುತಲಿರುವಾ ಮನಗಳಿಗೆ
ಕಾಯಕಯೋಗಿಯ ಕಾಯಕದಿಂದಾ
ಭಯಗಳು ಕಳೆದು ಧೈರ್ಯ ಮೂಡಿತು
ಬಯಸಿದ ಭಾಗ್ಯ ಕೈಯ ಸೇರಿತು.
ಅಡವಿಯ ಜಾಡನು ನಾಡಿನ ಹಾದಿಗೆ
ಸಂಧಿಸಿ ಬಂಧನ ಬಿಡಿಸುವರು
ಬಡವರ ಬಂಧು ಇವರು
ಮುಂದಿನ ಪೀಳಿಗೆ ಸಾಧನೆ ಹಾದಿಯ
ಅಡೆತಡೆ ಕಳೆಯುವ ಸಾಧಕರು
ಬದುಕನು ನೀಡಿದ ದೇವರು.
ಶಾಂತಿ ಸಹನೆಯ ಕಾಂತಿಯ ನಗುವಿನ
ಪ್ರೀತಿ ಪ್ರೇಮದ ಮಾತುಗಳು
ನೀತಿ ನ್ಯಾಯದ ಕಥನಗಳು
ಹತ್ತಿರವಿದ್ದರೆ ಮಠಗಳ ಮರೆಸುವ
ಕಾಂತಿಯ ತೇಜದ ಯತಿಯಿವರು
ಸತ್ಯ ತ್ಯಾಗದ ದೂತರು.
ಭಾರತಮಾತೆಯ ವರಪುತ್ರರು
ತಾರೆಯ ತೆರದಲಿ ಮಿರುಗುವರು
ಹರಿಯುವ ನದಿಗೆ ತೂಗುಸೇತುವೆ
ನಿರ್ಮಿಸಿ ನರರಿಗೆ ನೀಡಿದರು
ಕರಗಳ ಮುಗಿಯಲು ಯೋಗ್ಯರು.
ತಾಯಿ ಭಾರತಿಯ ಆಯಕಟ್ಟಿನಲಿ
ಪಯನಿಧಿ ದಾಟುವ ಭಯಗಳಿಗೆ
ಕಾಯುತಲಿರುವಾ ಮನಗಳಿಗೆ
ಕಾಯಕಯೋಗಿಯ ಕಾಯಕದಿಂದಾ
ಭಯಗಳು ಕಳೆದು ಧೈರ್ಯ ಮೂಡಿತು
ಬಯಸಿದ ಭಾಗ್ಯ ಕೈಯ ಸೇರಿತು.
ಅಡವಿಯ ಜಾಡನು ನಾಡಿನ ಹಾದಿಗೆ
ಸಂಧಿಸಿ ಬಂಧನ ಬಿಡಿಸುವರು
ಬಡವರ ಬಂಧು ಇವರು
ಮುಂದಿನ ಪೀಳಿಗೆ ಸಾಧನೆ ಹಾದಿಯ
ಅಡೆತಡೆ ಕಳೆಯುವ ಸಾಧಕರು
ಬದುಕನು ನೀಡಿದ ದೇವರು.
ಶಾಂತಿ ಸಹನೆಯ ಕಾಂತಿಯ ನಗುವಿನ
ಪ್ರೀತಿ ಪ್ರೇಮದ ಮಾತುಗಳು
ನೀತಿ ನ್ಯಾಯದ ಕಥನಗಳು
ಹತ್ತಿರವಿದ್ದರೆ ಮಠಗಳ ಮರೆಸುವ
ಕಾಂತಿಯ ತೇಜದ ಯತಿಯಿವರು
ಸತ್ಯ ತ್ಯಾಗದ ದೂತರು.
0 ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ