ಬುದ್ಧಿಜೀವಿಗಳ ಸದ್ದು ಕೇಳುತಿಹುದು
ಗೆದ್ದೇ ಬಿಡುವ ಬುದ್ಧಿ ತೋರುತಿಹುದು
ಮುದ್ದು ಮಾತುಗಳು ನಿದ್ದೆಗಿಳಿದು
ಗದ್ದಲವನೆಬ್ಬಿಸಿಹುದು.
ಗೆದ್ದೇ ಬಿಡುವ ಬುದ್ಧಿ ತೋರುತಿಹುದು
ಮುದ್ದು ಮಾತುಗಳು ನಿದ್ದೆಗಿಳಿದು
ಗದ್ದಲವನೆಬ್ಬಿಸಿಹುದು.
ನವ್ಯತೆಯ ಜಾಡು ಹಿಡಿದು
ಭವ್ಯ ಸಂಸ್ಕೃತಿಯ ಜರಿದು ತುಳಿದು
ಥರ್ಮಗಳು ಮೌಢ್ಯವೆಂದು
ಚಾರ್ವಾಕರಾದರಿವರು
ಭವ್ಯ ಸಂಸ್ಕೃತಿಯ ಜರಿದು ತುಳಿದು
ಥರ್ಮಗಳು ಮೌಢ್ಯವೆಂದು
ಚಾರ್ವಾಕರಾದರಿವರು
ಶುಧ್ಧ ಭಾರತಿಯ ಒಡಲಿನಲ್ಲಿ
ವೇದಗಳ ಕಲಿತು ಅರಿತು
ಬುಧ್ಧ ಜಿನ ಬಸವರೆಲ್ಲಾ
ಶುಧ್ಧತೆಗೆ ನಿಂತರಲ್ಲಾ
ವೇದಗಳ ಕಲಿತು ಅರಿತು
ಬುಧ್ಧ ಜಿನ ಬಸವರೆಲ್ಲಾ
ಶುಧ್ಧತೆಗೆ ನಿಂತರಲ್ಲಾ
ಶೋಧಿಸಿದ ಮೌಲ್ಯಗಳನು
ಬೊಧಿಸಿದ ಯತಿಗಳಿದ್ದ್ರು
ಆ ದಯಾನಂದರಂತ
ಸುಧಾರಕರಾಗಿಹೋದ್ರು
ಬೊಧಿಸಿದ ಯತಿಗಳಿದ್ದ್ರು
ಆ ದಯಾನಂದರಂತ
ಸುಧಾರಕರಾಗಿಹೋದ್ರು
ಅಹಿಂಸೆ ಎತ್ತಿ ಹಿಡಿದೇ
ಸಹಿಷ್ಣುವೆಸಿಕೊಂಡ್ರು
ಈ ಬುದ್ಧಿಜೀವಿಗಳಿಗೆ
ಆ ಬುದ್ಧಿ ಏಕೆ ಇಲ್ವ
ಸಹಿಷ್ಣುವೆಸಿಕೊಂಡ್ರು
ಈ ಬುದ್ಧಿಜೀವಿಗಳಿಗೆ
ಆ ಬುದ್ಧಿ ಏಕೆ ಇಲ್ವ
ಹಕ್ಕುಗಳು ತಮ್ಮದೆಂದು
ಮೂಕಿಗಳ ಕಡಿದು ತಿಂದ್ರು
ಅ ಕಾಲ ತಮಗೆ ಬರಲು
ಲೋಕ ಕಂಟಕವೆಂದ್ರು
ಮೂಕಿಗಳ ಕಡಿದು ತಿಂದ್ರು
ಅ ಕಾಲ ತಮಗೆ ಬರಲು
ಲೋಕ ಕಂಟಕವೆಂದ್ರು
ಕಡಿಯುವುದು ಧರ್ಮವಾದ್ರೆ
ಮಿಡಿವುದೇತಕೆ ಸಾವಿಗೆ
ಪಾಶ್ಚಾತ್ಯರಾದರವರು
ಪಶ್ಚಾತ್ತಾಪವೇಕೆ ನಮಗೆ.
ಮಿಡಿವುದೇತಕೆ ಸಾವಿಗೆ
ಪಾಶ್ಚಾತ್ಯರಾದರವರು
ಪಶ್ಚಾತ್ತಾಪವೇಕೆ ನಮಗೆ.
ಭಾರತದ ನೆಲದಲ್ಲಿ
ವಿರೋಧವೇನೆ ಇದ್ರು
ಪರಿವರ್ತಕರ ಕೊಂದ
ಗುರುತಗಳೇನೂ ಇಲ್ಲ
ವಿರೋಧವೇನೆ ಇದ್ರು
ಪರಿವರ್ತಕರ ಕೊಂದ
ಗುರುತಗಳೇನೂ ಇಲ್ಲ
ನೆಲದಿಂದೋಡಿಸಲಿಲ್ಲ
ಶಿಲುಬೆಗೇರಿಸಲಿಲ್ಲ
ರಾಜಾಶ್ರಯವನಿತ್ತು
ವಿಜಯವಾಗಿಸಿಹರು
ಶಿಲುಬೆಗೇರಿಸಲಿಲ್ಲ
ರಾಜಾಶ್ರಯವನಿತ್ತು
ವಿಜಯವಾಗಿಸಿಹರು
ಅಂತ ಸಂಸ್ಕೃತಿಯ ಒಡನಾಟ
ತಂತೇ ಇಂತಾ ಬುದ್ಧಿ.????
ತಂತೇ ಇಂತಾ ಬುದ್ಧಿ.????
ಸ್ವಂತ ವಿಷಯಗಳಲ್ಲಿ
ಕ್ರಾಂತಿ ಯಾತಕೆ ಬೇಕು
ಶಾಂತಿಯಿಂದರುಹಿ
ಭ್ರಾಂತಿ ಕಳೆದರಾಗದೇ.
ಕ್ರಾಂತಿ ಯಾತಕೆ ಬೇಕು
ಶಾಂತಿಯಿಂದರುಹಿ
ಭ್ರಾಂತಿ ಕಳೆದರಾಗದೇ.
0 ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ